ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಫೇಸ್ ಬುಕ್ ನಲ್ಲಿ ಟೀಕೆ ಮಾಡಿದ ಕಾನ್‍ಸ್ಟೆಬಲ್ ಅಮಾನತು…

318

ಹುಬ್ಬಳ್ಳಿ- ಶಹರ ಪೊಲೀಸ್ ಠಾಣೆಯ ಕಾನ್‍ಸ್ಟೆಬಲ್ ಆಗಿರುವ ಅರುಣ್ ಡೊಳ್ಳಿನ್ ತನ್ನ ಫೇಸ್ ಬುಕ್ ನಲ್ಲಿ ಕುಮಾರಸ್ವಾಮಿಯವರೆ ರಾಜೀನಾಮೆ ಯಾವಾಗ ಕೊಡ್ತಿರಾ? ಸರ್ಕಾರ ರಚನೆಯಾಗಿ 18 ದಿನಗಳಾದರು ರಾಜ್ಯ ರೈತರ ಸಾಲ ಮನ್ನಾ ಆಗಿಲ್ಲ. ಎಂದು ಪೋಸ್ಟ್ ನ್ನು ಶೇರ್ ಮಾಡಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದ ಹಿನ್ನಲೆ ಪೊಲೀಸ್ ಪೇದೆ ಅರುಣ್ ಡೊಳ್ಳಿನ್ ಅವರನ್ನು ಅಮಾನತು ಮಾಡಿ ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತರಾದ ಎಂ.ಎನ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.