ಬಿಜೆಪಿಯವರು ಇಲ್ಲಿ ಪಾದಯಾತ್ರೆ ಮಾಡುವ ಬದಲು ಪ್ರಧಾನಿ ಬಳಿ ಸಾಲಮನ್ನಕ್ಕೆ ಒತ್ತಾಯಿಸಬೇಕು- ಡಾ.ಜಿ ಪರಮೇಶ್ವರ್…

332
firstsuddi

ಬೆಂಗಳೂರು:ಕಾರ್ಗಿಲ್ ವಿಜಯ ಆಚರಣೆ ದಿನವಾದ ಇಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಡಾ.ಜಿ ಪರಮೇಶ್ವರ್ ಅವರು ಮಾತನಾಡಿದ್ದು ಪಾಕಿಸ್ತಾನ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಮುಂದಿನ ಪೀಳಿಗೆ ನೆನೆಯಬೇಕು ದೇಶದಲ್ಲಿ ಇಂದು ಕಾರ್ಗಿಲ್  ವಿಜಯ ದಿವಸ ಆಚರಣೆ ಮಾಡುತ್ತಿದ್ದೇವೆ. 1999ರಲ್ಲಿ ಪಾಕ್ ಸೈನಿಕರೊಂದಿಗೆ ಹೋರಾಡಿ 500 ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಎಂದ ಅವರು ನಂತರ ಪಾದಯಾತ್ರೆಗೆ ಸಂಬಂಧಿಸಿದಂತೆ  ಬಿಜೆಪಿಯವರು ಇಲ್ಲಿ ಪಾದಯಾತ್ರೆ ಮಾಡುವ ಬದಲು ಪ್ರಧಾನಿ ಬಳಿ ಹೋಗಿ ರೈತರ ಸಾಲಮನ್ನಾ ಮಾಡಿಸಲು ಪ್ರಯತ್ನ ನಡೆಸಬೇಕು ಎಂದು ಪರಮೇಶ್ವರ್ ತಿಳಿಸಿದ್ದಾರೆ.