ಮೂಡಿಗೆರೆ :ಮೂಡಿಗೆರೆ ತಾಲೂಕಿನ ಐತಿಹಾಸಿಕ ಹೇಮಾವತಿ ತೀರದಲ್ಲಿ ಸಾವಿರಾರು ಮೀನುಗಳು ಮಾರಣ ಹೋಮ ನಡೆದಿದೆ.ಆದರೆ,ಮತ್ಸ್ಯಗಳ ಈ ಮಾರಣ ಹೋಮಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಆದರೆ, ಮೀನುಗಾರರು ಮೀನನ್ನ ಹಿಡಿಯಲು ವಿಷ ಹಾಕಿರೋ ಶಂಕೆ ವ್ಯಕ್ತವಾಗಿದೆ. ಮೀನುಗಳು ಮಾರಣ ಹೋಮದಿಂದ ಹೇಮಾವತಿ ನದಿ ನೀರು ಕಲುಷಿತಗೊಂಡಿದ್ದು, ಸ್ಥಳಿಯರು ನೀರನ್ನ ಕುಡಿಯೋಕೆ ಹಿಂದೇಟು ಹಾಕ್ತಿದ್ದಾರೆ. ಹೇಮಾವತಿ ನದಿ ಜಾವಳಿ ಸಮೀಪ ಹುಟ್ಟಿ ಮೂಡಿಗೆರೆ ಮೂಲಕ ಹರಿದು ಹಾಸನ ಜಿಲ್ಲೆ ಪ್ರವೇಶಿಸಿ ಗೊರೂರು ಡ್ಯಾಮ್ ಸೇರುತ್ತದೆ. ಈ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.