ಮಂಗಳೂರು: ನೂತನವಾಗಿ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಇಂದು ಬೆಳಗ್ಗೆ ಬಿಜೆಪಿಯ ನೂರಾರು ಕಾರ್ಯಕರ್ತರು ಧಾರಾಕಾರವಾಗಿ ಸುರಿಯುವ ಮಳೆಯ ನಡುವೆ ಮಂಗಳೂರು ನಗರ ಹೊರಭಾಗದ ಕಂಕನಾಡಿ ರೈಲ್ವೇ ಜಂಕ್ಷನ್ ಬಳಿ ಚಂಡೆ ವಾದ್ಯ, ಘೋಷದೊಂದಿಗೆ ಸ್ವಾಗತಿಸಿದರು. ನಂತರ ನಳಿನ್ ಕುಮಾರ್ ಕಟೀಲ್ ಅವರು ತನ್ನ ಸ್ವಗೃಹಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದು, ಮನೆಯವರೊಂದಿಗೆ ಸಿಹಿಯನ್ನು ಹಂಚಿಕೊಂಡರು.










