ಮುಂಬೈ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಇಂದು ಭಾರತ ವಾಯು ಸೇನೆ ನಡೆಸಿದ ದಾಳಿಗೆ ಇಡೀ ದೇಶವೇ ಪ್ರಶಂಸೆ ವ್ಯಕ್ತಪಡಿಸಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವೀಟ್ ಮೂಲಕ ಯೋಧರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಐಎಎಫ್ನ ಮತ್ತೊಂದು ಅರ್ಥ ಇಂಡಿಯನ್ಸ್ ಅಮೇಜಿಂಗ್ ಫೈಟರ್ಸ್ ಜೈ ಹಿಂದ್ ಎಂದು ಮಮತಾ ಬ್ಯಾನರ್ಜಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.











