ಚಿಕ್ಕಮಗಳೂರು : ಮುಳ್ಳುಹಂದಿ ಹಾಗೂ ಚಿರತೆ ನಡುವೆ ನಡೆದ ಕಾಳಗದಲ್ಲಿ ಐದು ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ನಡೆದಿದೆ. ಗೊಲ್ಲರಹಟ್ಟಿ ತೋಟದಲ್ಲಿ ಚಿರತೆ ಹಾಗೂ ಮುಳ್ಳುಹಂದಿ ನಡುವೆ ಕಾಳಗ ನಡೆದಿದ್ದು, ಕಾಳಗದಲ್ಲಿ ಚಿರತೆ ಮೈತುಂಬಾ ಹಂದಿಯ ಮುಳ್ಳುಗಳು ಚುಚ್ಚಿಕೊಂಡಿದ್ದು, ಚಿರತೆ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










