ಚಿಕ್ಕಮಗಳೂರು : ಸಿ.ಎಲ್.ನವೀನ್ ಅವರು ಮಂಡಿಸಿರುವ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ…

371
firstsuddi

ಚಿಕ್ಕಮಗಳೂರು : ನಗರದ ಯುವಕ ಸಿ.ಎಲ್.ನವೀನ್ ಅವರು ಮಂಡಿಸಿರುವ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ನಗರದ ಡಿಲಕ್ಸ್ ಗಾರ್ಮೆಂಟ್ಸ್‍ನ ಮಾಲೀಕ ಸಿ.ಆರ್.ಲೋಕೇಶ್ ಹಾಗೂ ರಾಜೇಶ್ವರಿ ಅವರ ಪುತ್ರರಾಗಿರುವ ನವೀನ್ ಪ್ರೊ|| ಡಾ|| ಬಿ.ಯು.ಕಣ್ಣಪ್ಪನವರ್ ಅವರ ಮಾರ್ಗದರ್ಶನದಲ್ಲಿ ಫೈನಾನ್ಸಿಯಲ್ ಮ್ಯಾನೇಜ್‍ಮೆಂಟ್ ಇನ್ ಗೌರ್ನಮೆಂಟ್ ಫಸ್ಟ್ ಗ್ರೇಡ್ ಕಾಲೇಜ್ ಲೈಬ್ರರೀಸ್ –ಎ ಸ್ಟಡಿ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು.
ಸಿ.ಎಲ್.ನವೀನ್ ಅವರು ಪ್ರಸ್ತುತ ಹಾಸನ ಜಿಲ್ಲೆ ಗಂಡಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.