ಅಮರಾವತಿ ( ಆಂಧ್ರಪ್ರದೇಶ) : ಮೇಲಾಧಿಕಾರಿಯ ಕಿರುಕುಳದಿಂದ ವಲಯ ಅರಣ್ಯಾಧಿಕಾರಿ ಗುಂಡು ಹಾರಿಸಿಕೊಂಡು ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಸಾಲ್ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಅರಣ್ಯಾಧಿಕಾರಿ ದೀಪಾಲಿ ಚವಾಣ್(34) ಎನ್ನಲಾಗಿದ್ದು, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್ ಶಿವಕುಮಾರ್ ಎಂಬಾತನು ಕಿರುಕುಳ ನೀಡುತ್ತಿದ್ದ ಎಂದು ಆತ್ಮಹತ್ಯಾ ಚೀಟಿಯಲ್ಲಿ ವಿನೋದ್ ಶಿವಕುಮಾರ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಬಳಿಕ ಚವಾಣ್ ಕುಟುಂಬದ ದೂರಿನ ಮೇರೆಗೆ ಪೊಲೀಸರು ನಾಗ್ಪರ ರೈಲ್ವೇ ನಿಲ್ದಾಣದಲ್ಲಿ ವಿನೋದ್ ಶಿವಕುಮಾರ್ ಅವರನ್ನು ಬಂಧಿಸಲಾಗಿದೆ, ಎಂದು ಅಮರಾವತಿ ಎಸ್ಪಿ ಡಾ.ಹರಿಬಾಲಾಜಿ ತಿಳಿಸಿದ್ದಾರೆ.










