ಚಿಕ್ಕಮಗಳೂರು : ‘ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಕಾರುಸಮೇತ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆಯಲ್ಲಿ ಇಬ್ಬರು ಮೃತಪಟ್ಟರೆ, ಮತ್ತಿಬ್ಬರು ಸಾವಿನಿಂದ ಪಾರಾಗಿದ್ದಾರೆ.
ಮಂಜುನಾಥ್ ಹಾಗೂ ಅವರ ಅತ್ತೆ ಸುನಂದಮ್ಮ ಮೃತ ದುರ್ದೈವಿಗಳು. ಮಂಜುನಾಥ್ ಪತ್ನಿ ನೀತು ಹಾಗೂ ಪುತ್ರ ಧ್ಯಾನ್ ಇಬ್ಬರು ಬದುಕುಳಿದಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ನಾಪತ್ತೆಯಾಗಿದ್ದ ಮಂಜುನಾಥ್ ಹಾಗೂ ಅವರ ಅತ್ತೆ ಸುನಂದಮ್ಮಗೆ ನಿನ್ನೆ ಹುಡುಕಾಟ ನಡೆಸಿದ್ದರು. ಮಧ್ಯರಾತ್ರಿಯಿಂದ ಕಾರ್ಯಾಚರಣೆ ಬಳಿಕ ಮಂಜುನಾಥ್ ಮೃತದೇಹ ಎಂ.ಸಿಹಳ್ಳಿಯಿಂದ 42 ಕಿ.ಮೀ. ದೂರದ ಅಂಚೆ ಸಿದ್ದರಹಳ್ಳಿಯಲ್ಲಿ ಪತ್ತೆಯಾದ್ರೆ, ಸುನಂದಮ್ಮ ಮೃತದೇಹ ಕಾರಿನಲ್ಲೇ ಇತ್ತು.










