ಮೌಖಿಕವಾಗಿ ಯಾವುದೇ ಕಾಮಗಾರಿಗೆ ಆದೇಶ ನೀಡಬಾರದು : ಸಿಎಂ ಬೊಮ್ಮಾಯಿ.

66
firstsuddi

ಶಿವಮೊಗ್ಗ : ಮೌಖಿಕವಾಗಿ ಯಾವುದೇ ಕಾಮಗಾರಿಗೆ ಆದೇಶ ನೀಡಬಾರದು. ಒಂದು ವೇಳೆ ಆದೇಶ ನೀಡಿದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕಾಮಗಾರಿಯಲ್ಲಿ ಪರ್ಸೆಂಟೆಜ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಾಗೂ ಪಾರದರ್ಶಕವಾಗಿ ಕಾಮಗಾರಿ ನಡೆಸುವ ಸಲುವಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗುವುದು. ಸಿಎಂ ಕಾಮಗಾರಿಗಳ ಎಸ್ಟಿಮೇಷನ್​​ನಿಂದಲೇ ಎಲ್ಲಾವೂ ಪ್ರಾರಂಭವಾಗುತ್ತದೆ ಎಂಬ ದೂರಿನ ಹಿನ್ನೆಲೆ ಹಾಗೂ ಯಾರಿಗೆ ಬೇಕೋ ಅವರಂತೆಯೇ ಟೆಂಡರ್ ಕಂಡೀಷನ್ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಒಂದು ಉನ್ಜತ ಮಟ್ಟದ ಸಮಿತಿ ರಚನೆ ಮಾಡಲಾಗುತ್ತಿದೆ ಎಂದರು.

ಸಮಿತಿಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಹಣಕಾಸು ಪರಿಣಿತರು ಹಾಗೂ ಆ ಇಲಾಖೆಯ ತಾಂತ್ರಿಕ ಪರಿಣತಿ ಪಡೆದವರು ಇರುತ್ತಾರೆ. 50 ಕೋಟಿ ಮೇಲಿನ ಕಾಮಗಾರಿಯು ಕಮಿಟಿ ಮುಂದೆ ಹೋಗುತ್ತದೆ. ಎಸ್ಟಿಮೆಟ್ ಎಸ್.ಆರ್. ರೇಟ್ ಪ್ರಕಾರ ಇದೆಯೋ, ಇಲ್ಲವೋ, ಅದರಲ್ಲಿ ಏನಾದರು ಪ್ಯಾಡಿಂಗ್ ಮಾಡಿದ್ದಾರಾ. ಟೆಂಡರ್ ಕೆಟಿಟಿಪಿ ಕಾಯ್ದೆ ಪ್ರಕಾರ ಇದೆಯೋ, ಇಲ್ಲವೋ ಎಲ್ಲವನ್ನು ಗಮನಿಸಿ ಅನುಮೋದನೆ ನೀಡಿದ ಮೇಲೆಯೇ ಟೆಂಡರ್ ಮಾಡಬೇಕು ಎನ್ನುವಂತಹ ಪ್ರಕ್ರಿಯೆಯನ್ನು ಜಾರಿಗೆ ತರುತ್ತಿದ್ದೇವೆ ಎಂದರು.

ಈಗಾಗಲೇ ಇದು ಅಂತಿಮ ಹಂತಕ್ಕೆ ಬಂದಿದ್ದು, ಇನ್ನೊಂದು ವಾರದಲ್ಲಿ ಜಾರಿಗೆ ಬರುತ್ತದೆ. ಈ ಸಮಿತಿ ಕಾಮಗಾರಿಗೆ 15 ದಿನದ ಒಳಗೆ ಅನುಮೋದನೆ ನೀಡುತ್ತದೆ. ಒಂದು ಸಮಿತಿಗೆ ಒತ್ತಡ ಜಾಸ್ತಿಯಾದರೆ, ಇನ್ನೂಂದು ಸಮಿತಿ ರಚನೆ ಮಾಡಗುತ್ತದೆ. ಈಗ ಇದು ರಾಜ್ಯಮಟ್ಟದ ಸಮಿತಿಯಾಗಿದ್ದು, ಅಗತ್ಯ ಎನಿಸಿದರೆ, ಜಿಲ್ಲಾಮಟ್ಟಕ್ಕೂ ರಚನೆ ಮಾಡಲಾಗುವುದು ಎಂದರು.