ಬಾರೆ ಹಣ್ಣಿನ ಬೀಜ ಗಂಟಲಿನಲ್ಲಿ ಸಿಲುಕಿ ಮಗು ಸಾವು…

269
firstsuddi

ಬಳ್ಳಾರಿ: ಬಾರೆಹಣ್ಣಿನ ಬೀಜ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು  ಮಗುವೊಂದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೀರಲಗುಡ್ಡ ಗ್ರಾಮದಲ್ಲಿ ನಿನ್ನೆ ನಡೆದಿದೆ. ಶರತ್  2 ವರ್ಷದ  ಮೃತಪಟ್ಟ ಮಗು.  ಮಗುವಿಗೆ ಪೋಷಕರು ಬಾರೆಹಣ್ಣನ್ನು ಬೀಜ ತೆಗೆಯದ ತಿನ್ನಲು ಕೊಟ್ಟಿದ್ದಾರೆ.  ಹಣ್ಣನ್ನು ತಿನ್ನುತ್ತಿದ್ದ ಮಗುವಿನ ಗಂಟಲಿಗೆ ಹಣ್ಣಿನ ಬೀಜ ಸಿಕ್ಕಿ ಹಾಕಿಕೊಂಡಿದ್ದು, ತಕ್ಷಣ ಮಗುವನ್ನು  ಆಸ್ಪತ್ರೆಗೆ  ಕೊಂಡೊಯ್ಯದಿದ್ದಾರೆ ಅಷ್ಟರಲ್ಲಿ   ಮಗು  ಮೃತಪಟ್ಟಿದೆ.