ಬೆಂಗಳೂರು : ಪತಿ ಅಗಲಿಕೆಯಿಂದ ನೊಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರಿನಲ್ಲಿ ನಡೆದಿದೆ.ಮೀನಾ(22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೀನಾ ಇತ್ತೀಚೆಗೆ ಹರೀಶ್ ಎಂಬಾತನೊಂದಿಗೆ ಅಂತರ್ಜಾತಿ ವಿವಾಹವಾಗಿದ್ದರು. ಆದರೆ ಕಳೆದ ನವೆಂಬರ್ 21ರಂದು ಹರೀಶ್ನನ್ನು ಕೊಲೆ ಮಾಡಲಾಗಿತ್ತು. ಮೀನಾ ಅವರ ಸಹೋದರನೇ ಕೊಲೆ ಮಾಡಿದ್ದನೆಂದು ಶಂಕಿಸಲಾಗಿತ್ತು. ಪತಿಯ ಹತ್ಯೆಯಿಂದ ಮನನೊಂದು ಮೀನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ.










