ಹಾಸನದ ಶಾಸಕರ‌‌ ಮನೆ ಮುಂದೆ ನಡೆದಿರುವ ಘಟನೆ ಖಂಡನೀಯ :ಸಿದ್ದರಾಮಯ್ಯ

291
firstsuddi

ಬೆಂಗಳೂರು: ಹಾಸನದ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದ ಶಾಸಕರ‌‌ ಮನೆ ಮುಂದೆ ನಡೆದಿರುವ ಘಟನೆ ಖಂಡನೀಯ. ಇಂತಹ ಸಂದರ್ಭಗಳನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಲು ಪೋಲಿಸರು ಅವಕಾಶ ನೀಡಬಾರದು. ಘಟನೆ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು ಎಂದು ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿದ್ದಾರೆ.