ಬಗ್ಗಿ ಬಗ್ಗಿ ನಮಸ್ಕಾರ ಮಾಡೋರ ಬಗ್ಗೆ ಹುಷಾರಾಗಿರಿ : ಸಿದ್ದರಾಮಯ್ಯರನ್ನು ಎಚ್ಚರಿಸಿದ ರಮೇಶ್ ಕುಮಾರ್.

81
firstsuddi

ದಾವಣಗೆರೆ : ಬಗ್ಗಿ ಬಗ್ಗಿ ನಮಸ್ಕಾರ ಮಾಡೋರ ಬಗ್ಗೆ ಹುಷಾರಾಗಿರಿ. ನಿಮ್ಮ ಸುತ್ತಮುತ್ತ ಗಮನ ಇರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಸಿದ್ದಾರೆ.

ಸಿದ್ದರಾಮೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಿಮ್ಮ ಮುಂದೆ ಬಗ್ಗಿ ಬಗ್ಗಿ ನಮಸ್ಕಾರ ಮಾಡೋರನ್ನು ದೂರ ಇಡಿ. ನಿಮ್ಮ ಸುತ್ತಮುತ್ತ ಗಮನ ಇರಲಿ, ಹುಷಾರಾಗಿರಿ. ನೀವು ನಿಮ್ಮ ಕುಟುಂಬಕ್ಕೆ, ಹೆಂಡ್ತಿ ಮಕ್ಕಳಿಗೆ ಸೇರಿದವರಲ್ಲ, ಇಡೀ ರಾಜ್ಯದ ಜನರಿಗೆ ಸೇರಿದವರು ಎಂದು ಹೇಳಿದರು.

ಒಂದು ವೇಳೆ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಿದ್ದರೆ ಹುಟ್ಟುಹಬ್ಬವನ್ನು ಬೇರೆ ಥರ ಮಾತಾಡಿಕೊಳ್ಳುತ್ತಿದ್ದರು. ಅಧಿಕಾರದಲ್ಲಿ ಇದ್ದರೆ ಹೇಗೆ ಏರ್ಪಾಡು ಮಾಡುತ್ತಿದ್ದರು ಅಂತ ಮಾತಾಡ್ಕೊಳ್ತಿದ್ರು. ಅಧಿಕಾರದಲ್ಲಿ ಇಲ್ಲದಿದ್ರೂ ಜನ ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಈ ಕಾರ್ಯಕ್ರಮದ ಮೂಲಕ ನಮ್ಮ ಮೂಲ ಉದ್ದೇಶ ಈಡೇರಿದೆ ಎಂದು ತಿಳಿಸಿದರು.