ಚಿಕ್ಕಮಗಳೂರು: ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ಕಿರುಸಾಲ ಯೋಜನೆಯಡಿ ನೀಡಲಾದ 1.5 ಲಕ್ಷ ರೂ ಸಾಲದ ಚೆಕ್ನ್ನು ಶಾಸಕ ಸಿ.ಟಿ.ರವಿ ಶನಿವಾರ ನಿರಂತರ ಸವಿತಾ ಸ್ವಸಹಾಯ ಸಂಘದ ಸದಸ್ಯರಿಗೆ ವಿತರಿಸಿದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಹೆಚ್.ಎಲ್.ಕೃಷ್ಣೇಗೌಡ, ಎ.ಡಿ.ಒ ರಾಕೇಶ್, ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಜೆ.ಸತ್ಯನಾರಾಯಣ ಸಂಘದ ಅಧ್ಯಕ್ಷೆ ಸುನಂದ ಸದಾಶಿವ ಹಾಜರಿದ್ದರು.










