ಇಬ್ಬರು ರೌಡಿಶೀಟರ್ ಗಳ ಬರ್ಬರ ಕೊಲೆ…

361
firstsuddi

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ರೌಡಿಶೀಟರ್ ​​ಗಳನ್ನು ಕೊಲೆ ಮಾಡಿರುವ ಘಟನೆ ಕೋಣನುಕುಂಟೆ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.ಮುರುಗನ್​ ಹಾಗೂ ಪಳನಿ ಕೊಲೆಯಾದ ರೌಡಿಶೀಟರ್​ಗಳು. ಬಿಟಿಎಸ್ ಮಂಜ, ಮುರುಗ ಹಾಗೂ ಪಳನಿ ರೌಡಿಶೀಟರ್​ಗಳಾಗಿದ್ದು,  ಕಳೆದ ಒಂದು ತಿಂಗಳ ಹಿಂದೆ ಪಳನಿ ಮಗಳ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು. ಪಳನಿ  ತನ್ನ ಎಲ್ಲಾ ಸ್ನೇಹಿತರನ್ನು ಪಾರ್ಟಿಗೆ ಆಹ್ವಾನಿಸಿದ್ದ ಆದರೆ  ಮಂಜನ ಗ್ಯಾಂಗ್ ನನ್ನು ಆಹ್ವಾನಿಸಿರಲಿಲ್ಲ. ಹಾಗೂ ಹಳೆಯ ದ್ವೇಷದ ಹಿನ್ನಲೆ ತಡರಾತ್ರಿ  ಪಳನಿ  ಹಾಗೂ ಮುರುಗನ್ ಬಾರ್ ​ನಲ್ಲಿ ಮದ್ಯಪಾನ ಮಾಡಿ ಮನೆಗೆ ತೆರಳುತ್ತಿದ್ದ ವೇಳೆ ಬಿಟಿಎಸ್​​ ಮಂಜನ ​​ 8 ಜನರ  ಗ್ಯಾಂಗ್   ಆಟೋದಲ್ಲಿ ಬಂದು ದಾಳಿ ನಡೆಸಿದ್ದಾರೆ. ಲಾಂಗ್​ಗಳಿಂದ  ಕೊಚ್ಚಿ ನಡುರಸ್ತೆಯಲ್ಲೆ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.