ಪುನೀತ್ ಸಾವನ್ನ ಸಹಿಸಲಾಗುತ್ತಿಲ್ಲ – ಡೆತ್‍ನೋಟ್ ಬರೆದಿಟ್ಟು ಅಭಿಮಾನಿ ಸಾವಿಗೆ ಶರಣು…

70
firstsuddi

ತುಮಕೂರು : ಪುನೀತ್ ಅವರ ಸಾವನ್ನು ಸಹಿಸಲಾಗುತ್ತಿಲ್ಲ ಎಂದು ಡೆತ್‍ನೋಟ್ ಬರೆದಿಟ್ಟು ಅಭಿಮಾನಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಹೆಬ್ಬೂರಿನ ಕೋಡಿಪಾಳ್ಯದಲ್ಲಿ ನಡೆದಿದೆ.

ಭರತ್ (20) ಆತ್ಮಹತ್ಯೆಗೆ ಶರಣಾದ ಅಭಿಮಾನಿ. ಅಪ್ಪು ಸಾವನ್ನು ಸಹಿಸಲಾಗುತ್ತಿಲ್ಲ. ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತಿದ್ದೇನೆ. ಪುನೀತ್ ರಂತೆ ನನ್ನ ಕಣ್ಣನ್ನೂ ದಾನ ಮಾಡಿ ಎಂದು ಡೆತ್ ನೋಟ್ ಬರೆದಿಟ್ಟು ಭರತ್ ನೇಣಿಗೆ ಶರಣಾಗಿದ್ದಾನೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.