ಶಾಸಕರ ರಾಜೀನಾಮೆ ವಿಚಾರದಲ್ಲಿ ತಲೆಕೆಡಿಸಿಕೊಳ್ಳಲ್ಲ- ಕ್ಷೇತ್ರದ ಅಭಿವೃದ್ದಿ ನನ್ನ ಗುರಿ – ಯು. ಟಿ. ಖಾದರ್…

207
firstsuddi

ಮಂಗಳೂರು: ಅತೃಪ್ತಗೊಂಡಿರುವ ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯೇ ನನ್ನ ಕರ್ತವ್ಯ ಎಂದು ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

ಅವರು ಅತೃಪ್ತ ಶಾಸಕರ ರಾಜೀನಾಮೆ ವಿಚಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅತೃಪ್ತ ಶಾಸಕರ ರಾಜೀನಾಮೆಗೆ  ಕಾರಣ ತಿಳಿದಿಲ್ಲ. ಅವರ ರಾಜೀನಾಮೆಯ ಕುರಿತು ನಾನು ತಲೆಕೆಡಿಕೊಳ್ಳಲ್ಲ ನನಗೆ ಕ್ಷೇತ್ರದ ಅಭಿವೃದ್ಧಿಯೆ ನನ್ನ ಕರ್ತವ್ಯ. ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು  ನಮ್ಮ ನಾಯಕರು ಬಗೆಹರಿಸುತ್ತಾರೆ. ಪಕ್ಷದ ಎಲ್ಲಾ ತೀರ್ಮಾನಕ್ಕೂ ನಾವೆಲ್ಲರೂ ತಲೆಬಾಗುತ್ತೇವೆ. ಪಕ್ಷ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅಧಿಕಾರದ ದಾಹ ಬಿಡಬೇಕು ಎಂದು ಅತೃಪ್ತ ಶಾಸಕರಿಗೆ ಖಾದರ್ ಸಲಹೆ ನೀಡಿದರು.

ಪಕ್ಷ ಉಳಿಸುವ ಜವಬ್ದಾರಿ ನಾಯಕರಿಗೆ ಇರಬೇಕು ಅಲ್ಲದೆ ಸಮ್ಮಿಶ್ರ ಸರ್ಕಾರ ಜನಪರ ಕೆಲಸ ಮಾಡುತ್ತಿದೆ ನಾವೆಲ್ಲರೂ ಜನಪರ ಕಾರ್ಯ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.