ಬಳ್ಳಾರಿ : ಕುಡಿದ ಅಮಲಿನಲ್ಲಿ ಯುವಕನೋರ್ವ ತೆರೆದ ಚರಂಡಿಗೆ ಬಿದ್ದು ಮೋಜು-ಮಸ್ತಿ ಮಾಡಿರುವ ಘಟನೆಯೊಂದು ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ.
ಯುವಕನೋರ್ವ ತೆರೆದ ಚರಂಡಿಗೆ ಬಿದ್ದು, ಅದರಲ್ಲಿರುವ ತ್ಯಾಜ್ಯದ ನೀರನ್ನು ಕೈಯಿಂದ ಉಳಿದ ಯುವಕರಿಗೂ ಎರಚಿದ್ದಾನೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.










