ನವದೆಹಲಿಯಲ್ಲಿ 70ನೇ ಗಣರಾಜ್ಯೋತ್ಸವ ಸಂಭ್ರಮ…

205
firstsuddi

ನವದೆಹಲಿ: ಇಂದು ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದು, ರಾಜಪಥ್​​ನಲ್ಲಿ ಗಣರಾಜ್ಯೋತ್ಸವ ಪರೇಡ್​ ಆರಂಭವಾಗಿದ್ದು,  ಮೊದಲ ಬಾರಿಗೆ ಅಸ್ಸಾಂ ರೈಫಲ್ಸ್​​ನ ಆಲ್​ ವುಮೆನ್​ ಕಾಂಟಿಂಜೆಂಟ್ ರಾಜ್​ಪಥ್​​ನಲ್ಲಿ ಪಥಸಂಚಲನ ಮಾಡಲಾಗಿದೆ.  ಇಂಡಿಯಾ ಗೇಟ್​ ಬಳಿ ಇರುವ ಅಮರ್​ ಜವಾನ್​ ಜ್ಯೋತಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಆಚರಣೆಗೆ ಚಾಲನೆ ನೀಡಿದ್ದು, ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಆಗಮಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ  ಸಿರಿಲ್ ರಾಮಾಫೋಸಾ ಅವರು ಪಾಲ್ಗೊಂಡಿದ್ದಾರೆ. ವಿವಿಧ ಸ್ತಬ್ದಚಿತ್ರಗಳ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸಲಾಗಿದ್ದು, ಈ ಬಾರಿ ಮಹಾತ್ಮಾ ಗಾಂಧೀಜಿ ಅವರ ನೆನಪುಗಳನ್ನು ಅನಾವರಣ ಮಾಡಲಾಗಿದೆ.