ಚಿಕ್ಕಮಗಳೂರು :ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ…

241
firstsuddi

ಚಿಕ್ಕಮಗಳೂರು :ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜೇಸಿಐ ಚಿಕ್ಕಮಗಳೂರು ಮಲ್ನಾಡ್ ಘಟಕ, ರೋಟರಿ ಇನ್ನರ್ ವೀಲ್ ಹಾಗೂ ಸ್ವಸ್ಥ ಭೂಮಿ ಪ್ರತಿಷ್ಠಾನದ ವತಿಯಿಂದ ಮಹಿಳೆಯರಲ್ಲಿ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ವಾಕತಾನ್, ಪ್ರಯಾಸ್, ಹಾಗೂ ರನ್ ಫಾರ್ 9 ಜಾಗೃತಿ ಜಾಥವನ್ನು ತಹಶಿಲ್ದಾರ್ ಕಛೇರಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದವರಗೆ ಶುಕ್ರವಾರದಂದು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷರಾದ ರಘುನಂದನ್, ಕಾರ್ಯದರ್ಶಿ ಪ್ರದೀಪ್, ಸ್ವಸ್ಥ ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಅನಿಲ್ ಆನಂದ್, ವೇಣು ಗೋಪಾಲ್, ಕೆ.ಎಂ ಮೊಹಿದ್ದೀನ್ ಇಕ್ಬಾಲ್, ಪೂರ್ಣಿಮ ಅನಿಲ್, ಚೈತ್ರಾ ಶ್ವೇತಾ, ಇನ್ನರ್ ವೀಲ್ ಅಧ್ಯಕ್ಷೆ ಡಾ|| ಗೀತಾ ವೆಂಕಟೇಶ್, ಡಾ|| ಅನುರಾದ ಪ್ಯಾಟ್ರಿಕ್, ಡಾ|| ಶುಭ ವಿಜಯ್, ಡಾ|| ಕಲ್ಪನಾ ಡಾ|| ದೀಪ ರಘುನಂದನ್, ಹಾಗೂ ಸಹ್ಯಾದ್ರಿ ಪ್ಯಾರ ಮೆಡಿಕಲ್, ರಂಗನಾಥ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.