ಮೂಡಿಗೆರೆ : ಬಿಎಸ್ಪಿ ಮೂಡಿಗೆರೆ ಘಟಕದ ವತಿಯಿಂದ ಬಾಳೂರು ಹೋಬಳಿಯ ಕೆಳಗೂರು, ಜಾವಳಿ, ಸುಂಕಸಾಲೆ, ಗ್ರಾಮಗಳಲ್ಲಿ “ ಆರ್ಥಿಕ್ ಸಹಯೋಗ್ ದಿವಸ್ ” ಪ್ರಯುಕ್ತ ರಾಷ್ಟ್ರೀಯ ನಿಧಿ ಸಂಗ್ರಹಣೆ ಮಾಡಿದರು. ಬಾಳೂರು ಹೋಬಳಿಯ ಬಿಎಸ್ಪಿ ಮುಖಂಡ ಬಿನ್ನಡಿ ಜೈಪಾಲ್, ತಾಲ್ಲೂಕು ಕಾರ್ಯದರ್ಶಿ ಜಾವಳಿ ಅಭಿಷೇಕ್, ವಾಟೇಖಾನ್ ಮಹೇಶ್, ಬಿನ್ನಡಿ ಪ್ರಭಾಕರ್, ಹೋಬಳಿ ಪ್ರಧಾನ ಕಾರ್ಯದರ್ಶಿ ಸತೀಶ್ ಮೇಲ್ಕುಡಿಗೆ, ಬಿಳಗಲಿ ವಿಜಯ್, ಹೊಸಹಳ್ಳಿ ಸಾಗರ್, ಬಿನ್ನಡಿ ಅಶ್ವಥ್, ಜಾವಳಿ ಗಿರೀಶ್, ರತೀಶ್ ಹಾಗೂ ಶಿವಕುಮಾರ್ ಇದ್ದರು.










