ಚಿಕ್ಕಮಗಳೂರು : ನಟ ಸುದೀಪ್ ಅವರಿಗೆ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಸುದೀಪ್ ನಿರ್ಮಾಣದ ವಾರಸ್ಥಾರ ಧಾರಾವಾಹಿಗಾಗಿ ದೀಪಕ್ ಎಂಬುವವರ ಮನೆ ಹಾಗೂ ತೋಟವನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಬಾಡಿಗೆ ಹಣ ನೀಡದೆ ತೋಟ ನಾಶ ಮಾಡಿದ್ದಾರೆ ಎಂದು ನಟ ಸುದೀಪ್ ವಿರುದ್ಧ ದೀಪಕ್ ಅವರು ದೂರು ನೀಡಿದ್ದರು. ಸುದೀಪ್ ಅವರು ನಿನ್ನೆ ಕೋರ್ಟ್ ಗೆ ಹಾಜರಾಗಬೇಕಿತ್ತು. ಹಾಜರಾಗದ ಹಿನ್ನೆಲೆ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.










