ಚಿಕ್ಕಮಗಳೂರು: ಸಿಎಂ ಜನತಾ ದರ್ಶನ ಪ್ರಾರಂಭವಾಗಿದ್ದು, ಜನತಾ ದರ್ಶನಕ್ಕೆ ಕರೆಂಟ್ ಇಲ್ಲದೆ ಪರದಾಡುವಂತಾಗಿದ್ದು, ಮೆಸ್ಕಾಂ ಅಧಿಕಾರಿಗಳಿಗೆ ಜಿ.ಪಂ ಸಿಇಓ ಸತ್ಯಭಾಮ ತರಾಟೆಗೆ ತೆಗೆದುಕೊಂಡಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳು ಕರೆಂಟ್ ಸಮಸ್ಯೆ ಬಗೆಹರಿಸಲು ತೆಲೆಕೆಡಿಸಿಕೊಂಡಿದ್ದು, ನಿಗಧಿತ ವೇಳೆಯಲ್ಲಿ ಜನರೇಟರ್ ಆನ್ ಆಗದ ಕಾರಣ ಮೈಕ್ ಇಲ್ಲದೆ ಸಿಎಂ ಕುಮಾರಸ್ವಾಮಿ ಮಾತನಾಡುತ್ತಿದ್ದು, ಸದಾ ವಾಸ್ತು ಬಗ್ಗೆ ಯೋಚಿಸುವ ಹೆಚ್.ಡಿ ರೇವಣ್ಣ ಸಹ ಸಭೆಯಲ್ಲಿ ಭಾಗಿಯಾಗಿದ್ದಾರೆ.










