ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‍ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಆಲೇಶ್ ಅವರಿಗೆ ಬೀಳ್ಕೊಡುಗೆ…

207
firstsuddi

ಚಿಕ್ಕಮಗಳೂರು : ನಗರದ ಎಂ.ಜಿ.ರಸ್ತೆಯಲ್ಲಿರುವ ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ ಸಂಘದ ಕಾರ್ಯದರ್ಶಿಯಾಗಿ 38 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಎಸ್.ಆಲೇಶ್ ನಿವೃತ್ತಿಯಾಗಿದ್ದು ಅವರಿಗೆ ಸಂಘದ ವತಿಯಿಂದ ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸ್, ಉಪಾಧ್ಯಕ್ಷ ಎಂ.ಮಲ್ಲೇಶ್, ನಿರ್ದೇಶಕರು ಗಳಾದ ಸಿ.ಎಸ್.ಕೇಶವಮೂರ್ತಿ (ಮೊಗಣ್ಣ), ಸಿ.ವಿ.ಕುಮಾರ್, ಬಿ.ಎನ್.ರಾಜಣ್ಣಶೆಟ್ಟಿ, ಸಿ.ಆರ್. ಕೇಶವಮೂರ್ತಿ, ಸಿ.ಎಸ್.ಕೇಶವಮೂರ್ತಿ, ಎಂ.ಗಿರಿಧರ್ ಯತೀಶ್, ಶ್ರೀಮತಿ ಅಂಬಿಕಾ, ಶ್ರೀಮತಿ ಜಯಂತಿ.ಡಿ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಸಂಘದ ನಗದು ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಎ.ಹಚ್.ಗಾಯಿತ್ರಿ ರವರನ್ನು ಪ್ರಭಾರ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.