ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ: ಕೆ.ಜೆ.ಜಾರ್ಜ್…

215

ಚಿಕ್ಕಮಗಳೂರು : ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರು ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ ಇಟ್ಟಿದ್ವಿ. ಕೊಡೋದು-ಬಿಡೋದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ನಾವು ಬೇಡಿಕೆ ಇಟ್ಟಿದ್ವಿ, ಯಾಕೆ ಕೊಟ್ಟಿಲ್ಲ ಅನ್ನೋದು ಗೊತ್ತಿಲ್ಲ.ಎಷ್ಟು ಬಾರಿ ಮನವಿ ಮಾಡಿರೋದು ಎಂದು ನನಗೆ ಗೊತ್ತಿಲ್ಲ. ಅದು ನನ್ನ ಇಲಾಖೆಗೆ ಬರೋದಿಲ್ಲ, ಡಿಪಿಆರ್‍ಗೆ ಬರುತ್ತೆ. ಅವರಿಂದ ಮಾಹಿತಿ ಪಡೆದು ಹೇಳುತ್ತೇನೆ. ಅವರು ಅತ್ಯಂತ ಗೌರವಯುತ ಸ್ವಾಮೀಜಿ. ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ ಎಂದಿದ್ದಾರೆ.