ಬಾಗಲಕೋಟೆ : ಹೃದಯಾಘಾತದಿಂದ ಬಾಗಲಕೋಟೆ ಮೂಲದ ಸಿ ಆರ್ ಪಿ ಎಫ್ ಯೋಧ ಗುರುರಾಜ್ ಬಡಿಗೇರ್(52) ನಿಧನರಾಗಿದ್ದು, ಗುರುರಾಜ್ ಅವರು ಸಿಫ್ಟ್ ಬೆಟಾಲಿಯನ್ ನವದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಹದಿನೈದು ದಿನಗಳ ಹಿಂದೆ ಯಲಹಂಕಕ್ಕೆ ಬಂದಿದ್ದು, ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುರುರಾಜ್ ಅವರ ಅಂತ್ಯಸಂಸ್ಕಾರ ಇಂದು ರಾತ್ರಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಬಿಂಜವಾಡ ಗ್ರಾಮದಲ್ಲಿ ನಡೆಯಲಿದೆ.










