ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕೊನೆಯ ಬಜೆಟ್, ರೈತರು ಮತ್ತು ಬಡವರು, ಮಹಿಳೆಯರು ಮತ್ತು ಯುವಕರ ಮತಗಳನ್ನು ಸೆಳೆಯಲು ಪ್ರಯತ್ನಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಮಧ್ಯಂತರ ಬಜೆಟ್ನಲ್ಲಿ ಪ್ರವಾಸೋದ್ಯಮ, ವಸತಿ ಮತ್ತು ನವೀಕರಿಸಬಹುದಾದ ಇಂಧನ ಅಳವಡಿಕೆಯನ್ನು ಹೆಚ್ಚಿಸುವ ಕ್ರಮಗಳನ್ನು ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳು ಅಭೂತಪೂರ್ವ ಅಭಿವೃದ್ಧಿಯ ವರ್ಷಗಳು. ಜೊತೆಗೆ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಸುವರ್ಣ ಕ್ಷಣಗಳು ಎಂದು ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದಾರೆ. ಹಾಗಾದರೆ, ಈ ಬಜೆಟ್ನಿಂದಾಗಿ ಯಾರಿಗೆಲ್ಲಾ ಲಾಭ, ಯಾರಿಗೆಲ್ಲಾ ನಷ್ಟವಾಗಲಿದೆ ಎಂಬ ವಿವರ ಇಲ್ಲಿದೆ.
ಯಾರಿಗೆಲ್ಲಾ ಲಾಭ?
ಕೃಷಿ:-
ತೈಲಬೀಜಗಳ ಮೇಲೆ ಸ್ವಾವಲಂಬನೆಯನ್ನು ಹೆಚ್ಚಿಸುವುದರ ಜೊತೆಗೆ ಆಧುನಿಕ ಸಂಗ್ರಹಣೆ ಮತ್ತು ಪೂರೈಕೆ ಸರಪಳಿಗಳು ಸೇರಿದಂತೆ ಸುಗ್ಗಿಯ ನಂತರದ ಚಟುವಟಿಕೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಗಳನ್ನು ಉತ್ತೇಜಿಸಲು ಭಾರತ ಯೋಜಿಸುತ್ತಿದೆ. ಇದು ಡೈರಿ ರೈತರ ಅಭಿವೃದ್ಧಿಗಾಗಿ ಸಮಗ್ರ ಕಾರ್ಯಕ್ರಮವನ್ನು ಯೋಜಿಸುತ್ತಿದೆ. ಈ ವಲಯದ ಉತ್ಪಾದಕತೆ ಹೆಚ್ಚಿಸಲು ಮೀನುಗಾರಿಕೆಯ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತದೆ.
ಮಧ್ಯಮ ವರ್ಗ:-
ಬಾಡಿಗೆ ಮನೆಗಳು, ಕೊಳೆಗೇರಿಗಳು ಅಥವಾ ಅನಧಿಕೃತ ಕಾಲೊನಿಗಳಲ್ಲಿ ವಾಸಿಸುವ ಮಧ್ಯಮ ವರ್ಗದವರಿಗೆ ತಮ್ಮ ಸ್ವಂತ ಮನೆಗಳನ್ನು ಖರೀದಿಸಲು ಅಥವಾ ನಿರ್ಮಿಸಲು ಹಣಕಾಸಿನ ನೆರವು ಸ್ವಾಗತಾರ್ಹ ಕ್ರಮವಾಗಿದೆ. ‘ಎಲ್ಲರಿಗೂ ವಸತಿ’ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಗಮನಾರ್ಹ ಗುರುತಾಗಿದೆ.
ಪ್ರವಾಸೋದ್ಯಮ:-
ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಅವುಗಳ ಕಡೆಗೆ ಆಕರ್ಷಿಸಲು ಸರ್ಕಾರವು ರಾಜ್ಯಗಳನ್ನು ಉತ್ತೇಜನ ನೀಡಿದೆ. ಪ್ರವಾಸೋದ್ಯಮಕ್ಕಾಗಿ ರಾಜ್ಯಗಳಿಗೆ ದೀರ್ಘಾವಧಿಯ ಬಡ್ಡಿರಹಿತ ಸಾಲವನ್ನು ನೀಡಲಾಗುವುದು.
ಯಾರಿಗೆಲ್ಲಾ ನಷ್ಟ?
ಮೂಲಸೌಕರ್ಯ:-
ಬಜೆಟ್ ಮೂಲಸೌಕರ್ಯ ವೆಚ್ಚದಲ್ಲಿ 11.1% ರಷ್ಟು ಸಾಧಾರಣ ಹೆಚ್ಚಳ ಮಾಡಲಾಗಿದೆ. ಮೂಲಸೌಕರ್ಯಗಳ ಸವಾಲುಗಳನ್ನು ಎದುರಿಸಲು, ಭಾರತವು ಹೂಡಿಕೆಯಲ್ಲಿ ಗಣನೀಯ ಹೆಚ್ಚಳವನ್ನು ಪರಿಗಣಿಸಬೇಕು ಎಂದು ಹೇಳಲಾಗಿದೆ.
ಎಲೆಕ್ಟ್ರಿಕ್ ವಾಹನಗಳು:-
ಸಾರ್ವಜನಿಕ ಚಾರ್ಜಿಂಗ್ ಇನ್ಫ್ರಾವನ್ನು ಅಭಿವೃದ್ಧಿಪಡಿಸುವುದು ಮತ್ತು ವಿದ್ಯುತ್ ಸಾರಿಗೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳನ್ನು ಬಜೆಟ್ ಕೇಂದ್ರೀಕರಿಸಿದೆ. ಎಲೆಕ್ಟ್ರಿಕ್ ವಾಹನಗಳ ಮೂಲಕ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಮತ್ತು ಬಲಪಡಿಸಲು ಸರ್ಕಾರ ಯೋಜಿಸುತ್ತಿದೆ. ಮಾರ್ಚ್ನಲ್ಲಿ ಕೊನೆಗೊಳ್ಳುವ 1.2 ಬಿಲಿಯನ್ ಡಾಲರ್ ಸಬ್ಸಿಡಿ ಕಾರ್ಯಕ್ರಮವನ್ನು ವಿಸ್ತರಿಸದೇ ಬಿಟ್ಟಿದೆ.
ಆಭರಣ ವ್ಯಾಪಾರಿಗಳು:-
ಟಾಟಾ ಗ್ರೂಪ್ನ ಟೈಟಾನ್ ಕಂ., ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ ಲಿಮಿಟೆಡ್ ಮತ್ತು ಸೆಂಕೋ ಗೋಲ್ಡ್ ಸೇರಿದಂತೆ ಆಭರಣ ಷೇರುಗಳು ಇಂದು ಕುಸಿದವು. ಏಕೆಂದರೆ ಸರ್ಕಾರವು ಚಿನ್ನದ ಮೇಲಿನ ಆಮದು ತೆರಿಗೆಯನ್ನು 15% ರಷ್ಟು ಉನ್ನತ ಮಟ್ಟದಲ್ಲಿ ಬದಲಾಯಿಸದೇ ಬಿಟ್ಟಿದೆ.
ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಲ್ಲಿ ರಸ್ತೆ, ಬಂದರು ಮತ್ತು ವಿಮಾನ ನಿಲ್ದಾಣಗಳ ಮೇಲಿನ ಪ್ರಸ್ತಾವಿತ ವೆಚ್ಚವು ನಿರೀಕ್ಷೆಗಿಂತ ಕಡಿಮೆಯಾಗಿದೆ.










