ಚಿಕ್ಕಮಗಳೂರು : ಅಂಬೇಡ್ಕರ್ ವಿದ್ಯಾ ಸಂಸ್ಥೆಯ ಸ್ಥಾಪಕ ಸದಸ್ಯ ಕೆ.ಭದ್ರಯ್ಯ ಅವರಿಗೆ “ಶೋಷಿತ ಬಂಧು” ಪ್ರಶಸ್ತಿ ಗೌರವ…

182
firstsuddi

ಚಿಕ್ಕಮಗಳೂರು : ಸಮಾನತೆಗಾಗಿ ಸುಧೀರ್ಘ ಕಾಲ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮಾಜಿ ಸಂಚಾಲಕ, ನಗರದ ಅಂಬೇಡ್ಕರ್ ವಿದ್ಯಾ ಸಂಸ್ಥೆಯ ಸ್ಥಾಪಕ ಸದಸ್ಯ ಕೆ.ಭದ್ರಯ್ಯ ಅವರಿಗೆ ಬಿಎಸ್‍ಪಿ ಜಿಲ್ಲಾ ಸಹೋದರತ್ವ ಸಮಿತಿ ವತಿಯಿಂದ ಇತ್ತೀಚೆಗೆ “ಶೋಷಿತ ಬಂಧು” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಹರೀಶ್ ಮಿತ್ರ, ಕೆ.ಆರ್.ಗಂಗಾಧರ್, ಕೆ.ಎಸ್.ಮಂಜುಳಾ ಹಾಜರಿದ್ದರು.