ಚಿಕ್ಕಮಗಳೂರು : ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಸಂಘಟನೆಗಳು ನಗರದಲ್ಲಿ ದತ್ತಮಾಲಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ದತ್ತಜಯಂತಿ ಅಂಗವಾಗಿ ಮಾಲಾಧಾರಿಯಾಗಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಇತರೆ ಭಕ್ತಾಧಿಗಳು ಇಂದು ನಗರದ ನಾರಾಯಣಪುರ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡಿ ಪಡಿ ಸಂಗ್ರಹಿಸಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ಡಿಸಿ ದತ್ತಮಾಲಾಧಾರಿಗಳ ಬಗ್ಗೆ ಬಳಸಿರುವ ಭಾಷೆ ಗೌರವ ತರುವಂತದ್ದಲ್ಲ. ಕೂಡಲೇ ಜಿಲ್ಲಾಧಿಕಾರಿ ಸಕ್ರ್ಯೂಲರ್ ಹಿಂಪಡೆದು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
“ಭವತಿ ಭಿಕ್ಷಾಂದೇಹಿ ದೇಹಿ ಭಿಕ್ಷಾಂದೇಹಿ”
ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ಶ್ರೀ ಗುರು ದತ್ತರ ದರ್ಶನಕ್ಕೆ ಮೊದಲು ಮಾಲಾಧಾರಿಗಳು ಮನೆ ಮನೆಗೆ ತೆರಳಿ ಪಡಿಯಕ್ಕಿ ಭಿಕ್ಷೆ ಸ್ವೀಕರಿಸಲಾಯಿತು.
ಮಾಲಾಧಾರಿಗಳಿಗೆ ಪಡಿನೀಡಿ ಹರಸಿದವರೆಲ್ಲರಿಗೂ ಶ್ರೀ ಗುರುದತ್ತರ ಅನುಗ್ರಹ ದೊರಕಲಿ ಎಂದು ಪ್ರಾರ್ಥಿಸಲಾಯಿತು. pic.twitter.com/NsAaMUCBO1
— C T Ravi 🇮🇳 ಸಿ ಟಿ ರವಿ (@CTRavi_BJP) December 18, 2021










