ಚೆನ್ನೈ : ಮದುವೆಯ ಖರ್ಚು ಹಾಗೂ ಎಷ್ಟು ಉಡುಗೊರೆ ಬಂದಿದೆ ಎಂದು ತಂದೆ ಷಣ್ಮುಗಂ ಕೇಳಿದ್ದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ಅದಿಚ್ಚನಲ್ಲೂರು ಗ್ರಾಮದಲ್ಲಿ ನಡೆದಿದ್ದು, ಕೊಲೆಯಾದ ತಂದೆ ಷಣ್ಮುಗಂ(49) ಎನ್ನಲಾಗಿದ್ದು, ಗುರುವಾರ ಮಗ ಇಲಾಮತಿ ಮದುವೆಯಾಗಿದ್ದು, ಮದುವೆಗೆ ಆದ ಖರ್ಚು ಹಾಗೂ ಉಡುಗೊರೆಯ ಮಾಹಿತಿ ತಂದೆ ಷಣ್ಮುಗಂ ಕೇಳಿದ್ದು, ಮಗ ಇಲಾಮತಿ ಇದು ನನ್ನ

ಮದುವೆಯ ಮೊದಲ ರಾತ್ರಿ ಬೆಳಿಗ್ಗೆ ಮಾತನಾಡೋಣ ಎಂದು ತಂದೆ ಬಳಿ ಕೇಳಿಕೊಂಡಿದ್ದು, ಆದರೆ ತಂದೆ ಷಣ್ಮುಗಂ ಒಪ್ಪದೇ ಇದೇ ಕಾರಣಕ್ಕೆ ತಂದೆ ಮತ್ತು ಮಗನ ನಡುವೆ ಜಗಳವಾಗಿದ್ದು, ತಂದೆ ಕೋಲಿನಿಂದ ಮಗನಿಗೆ ಹೊಡೆದಿದ್ದು, ಇದರಿಂದ ಕೋಪಿಷ್ಟನಾದ ಮಗ ಕೋಲನ್ನು ಕಸಿದುಕೊಂಡು ಹಲ್ಲೆ ಮಾಡಿದ್ದು, ತಂದೆಯ ತಲೆಗೆ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಉದಯರ್ಪಾಲಯಂ ಠಾಣೆಯಲ್ಲಿ ದೂರು ದಾಖಲಾಗಿದೆ.










