ಬೆಂಗಳೂರು : ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ಶುಭಕೋರಿದ್ದಾರೆ. ನಟಸಾರ್ವಭೌಮ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಕನ್ನಡದ ಅನರ್ಘ್ಯ ರತ್ನ ಎಲ್ಲವೂ ಆಗಿರುವ ಡಾ.ರಾಜಕುಮಾರ್ ಅವರು ನನ್ನ ಪಾಲಿಗೆ ‘ನನ್ನ ಕಾಡಿನವರು’. ಅವರ ನಾಡು ನುಡಿಯ ಬಗೆಗಿನ ಪ್ರೀತಿ- ಬದ್ಧತೆ ನನಗೆ ಸದಾ ಸ್ಪೂರ್ತಿ. ರಾಜ್ ಕುಮಾರ್ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಗೌರವದಿಂದ ಸ್ಮರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.











