ನನ್ನ ಮಗನ ಮೇಲೆ ‌ಆಣೆ ಮಾಡಿ ಹೇಳುತ್ತೇನೆ ನಾನು ರೈತರ ಸಾಲ‌ಮನ್ನಾ ಮಾಡೇ ಮಾಡ್ತೀನಿ :ಸಿಎಂ ಕುಮಾರಸ್ವಾಮಿ

278
firstsuddi

ಬಾಗಲಕೋಟೆ:ರೈತರಿಗೆ ಋಣಮುಕ್ತ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ನನಗೆ ಇರೋನು ಒಬ್ಬ ಮಗ. ಅವನ ಮೇಲೆ ‌ಆಣೆ ಮಾಡಿ ಹೇಳುತ್ತೇನೆ ನಾನು ರೈತರ ಸಾಲ‌ಮನ್ನಾ ಸಾಲ‌ಮನ್ನಾ ಮಾಡೇ ಮಾಡುತ್ತೇನೆ. ಸಾಲಮನ್ನಾ ವಿಚಾರದಲ್ಲಿ ನಿಮಗೆ ಮೋಸ ಮಾಡೋದಿಲ್ಲ. ಸರ್ಕಾರ ನಡೆಸುವ ಶಕ್ತಿ ನೀವು ಕೊಟ್ಟಿದ್ದೀರಿ. ಫೆಬ್ರವರಿಯಲ್ಲಿ ಬಜೆಟ್ ಮಂಡಣೆ ಮಾಡಲಾಗುವುದು ಎಂದಿದ್ದಾರೆ.