ಮೂಡಿಗೆರೆ : ಕಾಡಾನೆ ಅಡಿಕೆ ತೋಟಕ್ಕೆ ನುಗ್ಗಿ ದಾಳಿ ಮಾಡಿರುವ ಘಟನೆ ಲೋಕುವಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಕಾಡಾನೆ ಮನಮೋಹನ್ ಎಂಬುವವರ ತೋಟಕ್ಕೆ ನುಗ್ಗಿ ಸುಮಾರು 15 ಅಡಿಕೆ ಮರಗಳು ಹಾಗೂ 50 ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿದ್ದು, ಮೂಡಿಗೆರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











