ಚಿಕ್ಕಮಗಳೂರು : ಪ್ರಿಯಾಂಕ ರೆಡ್ಡಿ ಅತ್ಯಾಚಾರ ಆರೋಪಿಗಳ ಎನ್‍ಕೌಂಟರ್ ಹಿನ್ನೆಲೆ, ಕಾಫಿ ನಾಡಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ…

436

ಚಿಕ್ಕಮಗಳೂರು : ಹೈದರಾಬಾದ್‍ನಲ್ಲಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅವರನ್ನು ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣದ ಆರೋಪಿಗಳನ್ನು ಇಂದು ಎನ್‍ಕೌಂಟರ್ ಮಾಡಲಾದ ಹಿನ್ನೆಲೆ, ತಾಲ್ಲೂಕಿನ ಆಲ್ದೂರು ವೃತ್ತದಲ್ಲಿ ಸಾರ್ವಜನಿಕರು ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆ ಆಗಿದೆ. ಆರೋಪಿಗಳ ಹತ್ಯೆ ಮೂಲಕ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇದು ಒಂದು ಪಾಠ ಆಗಲಿದೆ ಎಂದು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.