ಗದಗ: ತಮ್ಮ ಜಮೀನಿನ ಮೇಲಿನ ಸ್ಥಳೀಯ ವಕ್ಫ್ ಮಂಡಳಿಯ ಹಕ್ಕುಗಳ ವಿರುದ್ಧ 2022 ಆಗಸ್ಟ್ನಲ್ಲಿ ಕಾನೂನು ಹೋರಾಟ ನಡೆಸಿದ ಗದಗ ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ರೈತರು ಈಗ ತಮ್ಮ ಆಸ್ತಿಯನ್ನು ತಮ್ಮ ಹೆಸರಿಗೆ ಮರಳಿ ಪಡೆದಿದ್ದಾರೆ. 315 ಮಂದಿ ರೈತರು ತಮ್ಮ ಜಮೀನುಗಳ ಮೇಲಿನ ಮಂಡಳಿಯ ಹಕ್ಕುಗಳ ವಿರುದ್ಧ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. ಅವರಲ್ಲಿ ಹಲವರು ಈಗ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವ ಇತರ ರೈತರಲ್ಲಿ ಜಾಗೃತಿ ಮೂಡಿಸಲು ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಜಮೀನುಗಳ ಒಡೆತನದ ಗಲಾಟೆಯಿಂದಾಗಿ ಹಲವರು ಬೆಳೆ ವಿಮೆ ಪರಿಹಾರ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಬಹುತೇಕ ಅನಕ್ಷರಸ್ಥರಾಗಿರುವ ರೈತರಿಗೆ ತಮ್ಮ ಜಮೀನು ವಕ್ಫ್ ಆಸ್ತಿ ಎಂದು ನಮೂದಿಸಿರುವುದರಿಂದ ಅವರ ಮಾಲೀಕತ್ವದ ಬಗ್ಗೆ ಏನಾಗುತ್ತಿದೆ ಎಂದು ತಿಳಿದಿರಲಿಲ್ಲ. ಪೂರ್ವಜರಿಂದ ಪಡೆದ ನಮ್ಮ ಭೂಮಿ ವಕ್ಫ್ ಮಂಡಳಿ ಅಧೀನದಲ್ಲಿದೆ ಎಂಬುದು ಮಾರ್ಚ್ 21, 2019 ರಂದು ಹಲವರಿಗೆ ತಿಳಿಯಿತು. ಅನೇಕರು ತಮ್ಮ ಪೂರ್ವಜರಿಂದ ತಮ್ಮ ಭೂಮಿಯನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರೆ, ಕೆಲವರು ಅದನ್ನು ಕಬ್ಜಾ ಎಂಬ ಒಪ್ಪಂದದ ಮೇಲೆ ತೆಗೆದುಕೊಂಡಿರುವುದಾಗಿ ಹೇಳಿದ್ದರು. 1974ರ ಭೂಸುಧಾರಣಾ ಕಾಯ್ದೆ ಆಧಾರಿತವಾಗಿ ಪಡೆದ ತಮ್ಮ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ತಿಳಿದ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಆಗಸ್ಟ್ 2022 ರಲ್ಲಿ, 315 ಮಂದಿ ರೈತರು ತಮ್ಮ ಭೂಮಿಯನ್ನು ವಕ್ಫ್ ಮಂಡಳಿಯಿಂದ ಮರಳಿ ಪಡೆದರು.









