ತರೀಕೆರೆ : ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು…

278
firstsuddi

ಚಿಕ್ಕಮಗಳೂರು :ವಿದ್ಯುತ್ ತಂತಿ ತಗುಲಿ ಕಾಡಾನೆ  ಮೃತಪಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹರುವನಹಳ್ಳಿ ಗ್ರಾಮದ ಸಮೀಪ ನಡೆದಿದೆ.  ಕರಿರಾಜು ಎಂಬುವರ ಭತ್ತದ ಗದ್ದೆಯಲ್ಲಿ  ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಬೇಲಿಗೆ 25 ವರ್ಷದ ಕಾಡಾನೆ   ತಗುಲಿ  ಸವ್ವಾನ್ನಪ್ಪಿದೆ. ಸ್ಥಳಕ್ಕೆ ಲಕ್ಕವಳ್ಳಿ ಅರಣ್ಯಾಧಿಕಾರಿಗಳು ಭೇಟಿ ನೀಡಿ  ಪರಿಶೀಲಿನೆ ನಡೆಸುತ್ತಿದ್ದು, ಕರಿರಾಜು, ಅಯ್ಯಪ್ಪ, ಮುರುಗಾ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.