ಬೆಂಗಳೂರು : ಅನ್ನ ಭಾಗ್ಯ ಯೋಜನೆಯಿಂದ ಯಾರೂ ಸೋಮಾರಿಗಳಾಗಿಲ್ಲ. ಎಲ್ಲರೂ ಕಾಯಕ ಮಾಡಬೇಕು ಹಾಗೆ ದಾಸೋಹ ಕೂಡ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟುದಿನ ದುಡಿದುಕೊಂಡು ತಿಂದವರು ಕೆಲ ದಿನ ದುಡಿಯದೇ ತಿಂದರೆ ಏನ್ ತಪ್ಪು ? ಬಡವರು ಕೆಲ ದಿನ ರೆಸ್ಟ್ ಮಾಡ್ಲಿ ಬಿಡಿ ಎಂದು ತಮ್ಮ ಮಹತ್ವಾಕಾಂಕ್ಷೆಯ ಅನ್ನ ಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಂಪ್ರದಾಯದ ಹೆಸರಲ್ಲಿ ಕಂದಾಚಾರ ,ಮೌಡ್ಯಗಳು ಹೆಚ್ಚಾಗುತ್ತಿವೆ. ನನ್ನ ಕಾರಿನ ಮೇಲೆ ಕಾಗೆ ಕುಳಿತರೆ ಅದನ್ನ ಶನಿ ಕಾಟ ಅಂತಾ ಕರೆದರು. ಪಾಪ ಆ ಕಾಗೆಗೆ ಒಂದು ಕಣ್ಣು ಕಾಣ್ತಿರ್ಲಿಲ್ಲಾ ಹಾಗಾಗಿ ನನ್ನ ಕಾರಿನ ಮೇಲೆ ಕುಳಿತಿತ್ತು. ಈ ಮೌಡ್ಯಗಳನ್ನ ತಡೆಯಲು ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದ್ದೇವೆ. ದೇವಸ್ಥಾನಕ್ಕೆ ಹೋಗುವವರೆಲ್ಲಾ ಹಿಂದೂಗಳಲ್ಲ, ಮನುಷ್ಯತ್ವ ಇಲ್ಲದವನು ಹಿಂದೂ ಆಗಲಾರ. ಮಾಧ್ಯಮಗಳೂ ಈ ವಿಚಾರದಲ್ಲಿ ಜಾಗೃತಿ ವಹಿಸಬೇಕು ಎಂದು ಸಿಎಂ ಹೇಳಿದ್ದಾರೆ.