ಮಂಡ್ಯ: ಅಂಬಿ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಇಂದು ಗ್ರಾಮಸ್ಥರೆಲ್ಲ ಸೇರಿ ಅಂಬಿ ತಿಥಿ ಕಾರ್ಯ ನೆರವೇರಿಸಲಾಗುತ್ತಿದೆ. ಕೆಲ ಅಭಿಮಾನಿಗಳು ಕೇಶ ಮುಂಡನೆಯನ್ನು ಮಾಡಿಸಿಕೊಂಡು ಅಂಬಿ ಪುಣ್ಯತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಂಬರೀಷ್ ಗೆ ಇಷ್ಟವಾದ ತಿಂಡಿ ,ತಿನಿಸುಗಳನ್ನು ಇಟ್ಟು ಅಂಬಿ ಚಿತಾಭಸ್ಮ ತಂದು ಶಾಸ್ತ್ರೋಕ್ತವಾಗಿ ತಿಥಿಕಾರ್ಯ ನೆರವೇರಿಸಲಿದ್ದಾರೆ. ಈ ವೇಳೆ ಸಾವಿರಾರು ಜನರಿಗೆ ಅನ್ನದಾನವನ್ನು ಮಾಡಲಾಗುತ್ತದೆ.










