ಸಂಸದ ನಿಶಿಕಾಂತ್ ದುಬೆ ಪಾದ ತೊಳೆದು ನೀರು ಸೇವಿಸಿದ ಬಿಜೆಪಿ ಕಾರ್ಯಕರ್ತ…

448
firstsuddi

ಜಾರ್ಖಂಡ್‌: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ಸಂಸದರೊಬ್ಬರ ಕಾಲು ತೊಳೆದು ಆ ನೀರನ್ನು ಕುಡಿದಂತಹ ಘಟನೆ ಜಾರ್ಖಂಡ್​ ರಾಜ್ಯದಲ್ಲಿ ನಡೆದಿದೆ.ಜಾರ್ಖಂಡ್​ನ ಗೊಡ್ಡಾ ಲೋಕಸಭಾ ಕ್ಷೇತ್ರದಲ್ಲಿ ಘಟನೆ ನಡೆದಿದ್ದು, ಇಲ್ಲಿನ ಸಂಸದ ನಿಶಿಕಾಂತ್​ ದುಬೆ ಅವರ ಕಾಲು ತೊಳೆದ ಕಾರ್ಯಕರ್ತನೋರ್ವ ಬಳಿಕ ಆ ನೀರನ್ನು ಕುಡಿದಿದ್ದಾನೆ.  ಆದರೆ ಇದನ್ನು ವಿರೋಧಿಸಬೇಕಾಗಿದ್ದ ಸಂಸದ ನಿಶಿಕಾಂತ್​ ದುಬೆ ಈ ಘಟನೆಯ ಫೋಟೋಗಳನ್ನು ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ.  ಈಗ ಅದು ವೈರಲ್ ಆಗಿದ್ದು, ಈ ಘಟನೆ ಸಾಕಷ್ಟು ವಿಮರ್ಶಾತ್ಮಕ ಟೀಕೆಗೆ ಗುರಿಯಾಗಿದೆ.