ಚಿಕ್ಕಮಗಳೂರಿನ ರಾಮನಹಳ್ಳಿ ಅಂಗನವಾಡಿ‌ಯಲ್ಲಿ  ಕುಕ್ಕರ್ ಸಿಡಿದು ಮಗುವಿಗೆ ಗಾಯ…

383
firstsuddi

ಚಿಕ್ಕಮಗಳೂರು : ಅಂಗನವಾಡಿ‌ಯಲ್ಲಿ  ಕುಕ್ಕರ್ ಸಿಡಿದು ಮಗುವಿಗೆ ಗಾಯಗಳಾಗಿರುವ  ಘಟನೆ  ತಾಲೂಕಿನ  ರಾಮನಹಳ್ಳಿ ಅಂಗನವಾಡಿ‌ಯಲ್ಲಿ ನಡೆದಿದೆ. ಅಂಗನವಾಡಿಯಲ್ಲಿ ಕುಕ್ಕರ್ ಸಿಡಿದ ಪರಿಣಾಮ ಮಹಮ್ಮದ್ (5) ಎಂಬ ಮಗುವಿನ  ತಲೆ ಹಾಗೂ ಕೆನ್ನೆಗೆ ಗಾಯಗಳಾಗಿದ್ದು,  ಮಗುವನ್ನು  ಜಿಲ್ಲಾಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಅಂಗನವಾಡಿ ಶಿಕ್ಷಕಿ ಹಾಗೂ ಅಧಿಕಾರಿಗಳ ವಿರುದ್ಧ  ಪೋಷಕರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.