ಬೆಂಗಳೂರು: ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದ ಆಯೋಜಿಸಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಮೊದಲನೇ ಹಂತದಲ್ಲಿ ಪುನಶ್ಚೇತನಗೊಳಿಸುವ ಕಾಮಗಾರಿಗೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ೮೫ ವರ್ಷದ ಹಿಂದೆ ವಿಶ್ವೇಶ್ವರಯ್ಯನವರು ಇದೇ ಡ್ಯಾಂಗೆ ಅಡಿಗಲ್ಲು ಹಾಕಿದ್ದರು. ಇದರ ಪುನಶ್ಚೇತನಕ್ಕೆ ಅಡಿಗಲ್ಲು ಹಾಕುವ ಅವಕಾಶ ನನಗೆ ದೊರಕಿದ್ದು ಸಂತಸದ ಸಂಗತಿ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.










