ಬೆಂಗಳೂರು:ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ವಿಧಾನಸಭೆಯಲ್ಲಿ 2019-20ನೇ ಸಾಲಿನ ಆಯ-ವ್ಯಯವನ್ನು ಮಂಡಿಸಿದರು.
2019-20 ನೇ ಸಾಲಿನ ಬಜೆಟ್ ಹೈಲೈಟ್ಸ್…
- ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನಮ್ಮ ಸರ್ಕಾರದ ಧ್ಯೇಯ. ಅದಕ್ಕೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಿದ್ದೇವೆ.
- ನೇಗಿಲ ಯೋಗಿಗೆ ಹೆಗಲು ಕೋಡುವುದು ನಮ್ಮ ಜವಾಬ್ದಾರಿ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು ನಮ್ಮ ಆದ್ಯತೆ.
- ಕೊಡಗಿನಲ್ಲಿ ಮನೆ ಕಳೆದುಕೊಂಡು 840 ನಿರಾಶ್ರಿತರಗೆ ಮನೆ ಕಟ್ಟಿಸಿಕೊಟ್ಟಿದ್ದೇವೆ.
- ನೈಸರ್ಗಿಕ ವಿಕೋಪ ತಡೆಗೆ ಕ್ರಮ ಕೈಗೊಂಡಿದ್ದೇವೆ.
- ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಕ್ರಮ.
- ಬೀದಿಬದಿ ವ್ಯಾಪಾರಿಗಳಿಗೆ 7.5 ಕೋಟಿ ರೂಪಾಯಿ ಸಾಲ ವಿತರಣೆ.
- ಕೊಡಗಿನಲ್ಲಿ 846 ನಿರಾಶ್ರಿತರಿಗೆ ಸರ್ಕಾರದಿಂದ ಮನೆ ನಿರ್ಮಾಣ.
- ಸಂಧ್ಯಾ ಸುರಕ್ಷಾ ಮಾಸಾಶನ 1 ಸಾವಿರಕ್ಕೆ ಏರಿಕೆ
- ರಾಜ್ಯದ 156 ತಾಲೂಕುಗಳು ಬರಪೀಡಿಕವಾಗಿವೆ, ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸಮರ್ಧವಾಗಿ ಸಜ್ಜಾಗಿದೆ.
- ಆರೋಗ್ಯ ಕರ್ನಾಟಕ ಯೋಜನೆಯನ್ನು ಆಯುಷ್ಮಾನ್ ಭಾರತ ಯೋಜನೆ ಜೊತೆ ವಿಲೀನಗೊಳಿಸಲಾಗಿದೆ.
- ಸಿರಿಧಾನ್ಯ ಬೆಳೆಯುವ ಕೃಷಿಕರಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ.
- ಕರಾವಳಿ ಭಾಗದ ರೈತರಿಗೆ ಪ್ರೋತ್ಸಾಹ ಧನ.
- ಕೃಷಿ ತೋಟಗಾರಿಕೆ, ರೇಷ್ಮೆ, ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗೆ 150 ಕೋಟಿ ರೂಪಾಯಿ.
- ಬರಪರಿಹಾರಕ್ಕಾಗಿ ಅಗತ್ಯ ಕ್ರಮ 300 ಕೋಟಿ ರೂ ಬಿಡುಗಡೆ.
- ಕೋಲಾರದಲ್ಲಿ ಟೊಮ್ಯಾಟೋ ಉತ್ಪಾದನಾ ಘಟಕ.
- ತೋಟಗಾರಿಕೆಗೆ 150 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್.
- ರಾಜ್ಯದ ನೀರಾವರಿ ಯೋಜನೆಗೆ 1050 ಕೋಟಿ ರೂ. ಮೀಸಲು.
- ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2500 ಕೋಟಿ.
- ಧಾರವಾಡದಲ್ಲಿ ಮಾವು ಉತ್ಪಾದನಾ ಘಟಕ ಸ್ಥಾಪನೆ.
- ಹಾಲು ಉತ್ಪಾದನಾ ಪ್ರೋತ್ಸಾಹ ಧನ 6 ರೂಪಾಯಿ ಹೆಚ್ಚಳ.
- ಮಂಗನ ಕಾಯಿಲೆ ನಿಯಂತ್ರಣಕ್ಕೆ 5 ಕೋಟಿ ರೂಪಾಯಿ ಅನುದಾನ.
- ಮೀನುಗಾರಿಗೆ, ದೋಣಿಗಳಿಗೆ ಶೇ 50ರಷ್ಟು ಸಹಾಯಧನ
- ಸಿಗಡಿ ಮೀನು ಕೃಷಿ ಪ್ರೋತ್ಸಾಹಕ್ಕೆ ಶೇ.50ರಷ್ಟು ಅನುದಾನ.
- ಮಲ್ಪೆ ಕಡಲ ತೀರದಲ್ಲಿ ತ್ಯಾಜ್ಯ ಘಟಕ ನಿರ್ವಹಣೆಗೆ 15 ಕೋಟಿ.
- ರೈತ ಕೃಷಿ ಕಣಜ ಯೋಜನೆಗೆ ೧೫ ಕೋಟಿ
- ಈರುಳ್ಳಿ, ಆಲೂಗಡ್ಡೆ ಬೆಳೆಗಳಿಗೆ ಪ್ರೋತ್ಸಾಹ ಧನ.
- ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ.
- ಇಸ್ರೇಲ್ ಮಾದರಿ ಕೃಷಿ ತಂತ್ರಜ್ಞಾನ ಜಾರಿ
- ಆಭರಣಗಳ ಮೇಲೆ ಬೆಳೆ ಸಾಲ. ರೈತ ಮಹಿಳೆಯರ ಚಿನ್ನದ ಮೇಲೆ ಶೇ.3ರಷ್ಟು ಬಡ್ಡಿದರದಲ್ಲಿ ಸಾಲ.
- ನಂದಿನ ಪಾರ್ಲರ್ ಗಳಲ್ಲಿ ಸಿರಿಧಾನ್ಯಗಳ ಮಾರಾಟಕ್ಕೆ ಅವಕಾಶ.
- ಕೃಷಿ ಉತ್ತನ್ನ ಮಾರುಕಟ್ಟೆಗಳಲ್ಲಿ ಬೆಲೆ ಕುಸಿದಾಗ ಸಂಗಹಕ್ಕೆ ಉಗ್ರಾಣ ನಿಗಮದಲ್ಲಿ
- ಕೊಪ್ಪಳ ಏತ ನೀರಾವರಿಗೆ 200 ಕೋಟಿ ರೂ. ಮೀಸಲು.
- ರೈತರ ಪಂಪ್ಸೆಟ್ಗೆ ಅನುದಾನ
- 100 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳ ಸಮಗ್ರ ಅಭಿವೃದ್ಧಿ.
- ನೀರಾವರಿ ಯೋಜನ್ತೆಗಳಿಗೆ ಒಟ್ಟು 1,563 ಕೋಟಿ ರೂ. ಮೀಸಲು.
- 200 ಕೋಟಿ ರೂ. ವೆಚ್ಚದಲ್ಲಿ ಶಿಕಾರಿಪುರ ತಾಲೂಕಿನ ಕೆರೆಗಳ ತುಂಬಿಸಲು ಯೋಜನೆ.
- ಬಳ್ಳಾರಿ ಗ್ರಾಮಾಂತರಕ್ಕೆ 60 ಕೋಟಿ ರೂ.
- ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ.
- ಚಿಕ್ಕಮಗಳೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 50 ಕೋಟಿ ರೂ.
- ವಿಜಯಪುರದಲ್ಲಿ ಆಸ್ಪತ್ರೆಗೆ 40 ಕೋಟಿ ರೂ.
- ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು.
- ಬಸವನ ಬಾಗೇವಾಡಿ ಮೂಲ ಸೌಕರ್ಯ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ.
- ಹವಾಮಾನ ಬದಲಾವಣೆ ಅಧ್ಯಯನಕ್ಕೆ 2 ಕೋಟಿ ರೂ. ಅನುದಾನ.
- ಚರಂಡಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ
- 4 ಹೊಸ ತಾಲೂಕು ಘೋಷಣೆ : ಹಾರೋಹಳ್ಳಿ, ಕಳಸ, ಚೇಳೂರು ಮತ್ತು ತೇರದಾಳ.
- ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 500 ರೂಪಾಯಿ ಹೆಚ್ಚಳ.
- ಹಾಸನದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಘೋಷಣೆ.
- 20 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ.
- ಹೇಮಾವತಿ ಎಡದಂಡೆ ಕಾಲುವೆಗೆ 80 ಕೋಟಿ ರೂ.
- 449 ಕೋಟಿ ರೂ. ಕೆರೆಗಳ ಅಭಿವೃದ್ಧಿಗೆ ಮೀಸಲು.
- ಬೀದರ್ ಜಿಲ್ಲೆಯ ಎಲ್ಲ ಕೆರೆಗಳ ಅಭಿವೃದ್ಧಿಗೆ 300 ಕೋಟಿ ರೂ.
- 12 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆ ಜಾರಿ.
- ಕೆರೂರು, ಮಸ್ಕಿ ನೀರಾವರಿ ಯೋಜನೆ ಜಾರಿಗೆ.
- ಚಾಮರಾಜನಗರದ ರೇಷ್ಮೆ ಕೈಗಾರಿಕಾ ಪುನಶ್ಚೇನಕ್ಕೆ 6 ಕೋಟಿ ರೂ.
- ನಾಟಿಕೋಳಿ ಸಾಕಣೆಗೆ 5 ಕೋಟಿ ರೂ. ಉತ್ತೇಜನ ನೀಡಿಕೆ.
- ಜೇನುಕೃಷಿ ಉತ್ತೇಜನಕ್ಕಾಗಿ 5 ಕೋಟಿ ರೂ. ಒದಗಿಸಲಾಗಿದೆ.
- ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ.
- ಅನ್ನ ಭಾಗ್ಯ ಯೋಜನೆಗೆ 3700 ಕೋಟಿ ರೂ. ಯೋಜನೆ ಸೋರಿಕೆ ಪತ್ತೆಗೆ ವಿಚಕ್ಷಣ ದಳ ಘೋಷಣೆ.
- 3 ಮಹಾನಗರ ಪಾಲಿಕೆಗೆ ತಲಾ 150 ಕೋಟಿ ರೂಪಾಯಿಗಳು. ಬೆಳಗಾವಿ, ಬಳ್ಳಾರಿ ಮತ್ತು ತುಮಕೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ, ವಿಜಯಪುರ ಪಾಲಿಕೆ ಅಭಿವೃದ್ಧಿಗೆ ತಲಾ 125 ಕೋಟಿ ರೂಪಾಯಿಗಳು.
- ಶಿಕ್ಷಕರ ಸಾಮರ್ಥ್ಯ ವರ್ಧನೆ, ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆ.
- ಅಂಕಪಟ್ಟಿಗಳ ಡಿಜಿಟಲೀಕರಣಕ್ಕೆ 1 ಕೋಟಿ ರೂ. ಅನುದಾನ.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಲಕಿಯರಿಗೆ ಬಾಲ ಮಂದಿರ ಸ್ಥಾಪನೆ.
- ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ 1,325 ಕೋಟಿ ರೂ ಅನುದಾನ.
- ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1000 ಕೋಟಿ ರೂ
- ಬೆಂಗಳೂರು ಆಟೋ ಟ್ಯಾಕ್ಸಿ ಚಾಲಕರಿಗೆ ಸಾರಥಿ ಸೂರು ಯೋಜನೆ.
- ಬೆಂಗಳೂರಿನ ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ ಅನುದಾನ.
- ಯಶವಂತ ಪುರ ರೈಲ್ವೆ-ಮೆಟ್ರೋ ನಿಲ್ದಾಣದ ನಡುವೆ ಪಾದಾಚಾರಿ ಮೇಲ್ಸೇತುವೆ.
- BPLಕಾರ್ಡ್ ಹೊಂದಿರುವ ಗರ್ಭಿಣಿಯರಿಗೆ 6 ತಿಂಗಳ ಮಾಸಿಕ ಸಹಾಯ ಧನ 1000 ರೂ ಯಿಂದ ರೂ 2000ಕ್ಕೆ ಏರಿಕೆ.
- ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂಪಾಯಿ
- ಪ್ರಖ್ಯಾತ ಶಿಲ್ಪಕಲೆ ಪ್ರಚಾರಕ್ಕೆ ಕೋಲಾರ ಜಿಲ್ಲೆಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಕೇಂದ್ರ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ.
- ಎಸ್ಸಿ ಎಸ್ಟಿ ಅಭಿವೃದ್ಧಿಗೆ 30,445 ಕೋಟಿ ಅನುದಾನ.
- ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ 5 ಕೋಟಿ ರೂ.
- ವೆಚ್ಚದಲ್ಲಿ ಮಂಗನ ಕಾಯಿಲೆ ಸಂಶೋಧನೆ ಮತ್ತು ಚಿಕಿತ್ಸಾ ಘಟಕ ಸ್ಥಾಪನೆ.
- ಬೆಂಗಳೂರು ಏರ್ ಪೋರ್ಟ್ ಗೆ ಹೊಸ ಟರ್ಮಿನಲ್ ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಗೆ 32 ಕೋಟಿ ರೂಪಾಯಿ ಅನುದಾನ.
- ವಿವಿಧ ಮಠ,ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ.
- ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ. ಮೀಸಲು.
- ವಿಜಯಪುರ 100 ಹಾಸಿಗೆಯ ಸಂಜಯ್ ಗಾಂಧಿ ಆಸ್ಪತ್ರೆಗೆ 40 ಕೋಟಿ ರೂ.
- ಮೆಟ್ರೋ ಹಾಗೂ ಬಸ್ ಸಾರಿಗೆ ಸೇವೆಗೆ ಏಕ ರೂಪದ ಪಾಸ್.
- ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಚಾರ್ಜಿಂಗ್ ವ್ಯವಸ್ಥೆ.
- ಮುಸ್ಲಿಂ ಖಬ್ರಸ್ಥಾನಗಳ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ.
- ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮೀಸಲು.
- ಮಾನಸ ಸರೋವರ ಯಾತ್ರಿಗಳ ಪ್ರೋತ್ಸಾಹ ಧನ 30 ಸಾವಿರ ರೂಪಾಯಿಗಳಿಗೆ ಏರಿಕೆ.
- ಅಲ್ಪಸಂಖ್ಯಾತರೇ ಹೆಚ್ಚಿರುವ ಪ್ರದೇಶ ಅಭಿವೃದ್ಧಿಗೆ 400 ಕೋಟಿ
- ಪೆಟ್ರೋಲ್ ಚಾಲಿತ ಆಟೋಗಳನ್ನು ವಿದ್ಯುತ್ ಚಾಲಿತ ಆಟೋಗಳಾಗಿ ಪರಿವರ್ತಿಸಲು ಸಹಾಯ ಧನ.
- 4 ಸಾರಿಗೆ ಸಂಸ್ಥೆಗಳಿಗೆ 3544 ವಿವಿಧ ಮಾದರಿಯ ಹೊಸ ಬಸ್ ಗಳು.
- ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ. ಅನುದಾನ
- ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ
- ಮಂಡ್ಯ ಮೈಶುಗರ್ ಸಕ್ಕರ್ ಕಾರ್ಖಾನೆ ಮರು ನಿರ್ಮಾಣಕ್ಕೆ 100 ಕೋಟಿ ರೂ.
- 90 ಕೋಟಿ ರೂ. ನರೇಗಾ ಯೋಜನೆಯಡಿ ಶಾಲಾ ಕಂಪೌಂಡ್ ನಿರ್ಮಾಣ.
- 2000 ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ










