ತಮಿಳುನಾಡು- ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಹಿರಿಯ ನಾಯಕನಿಗೆ ಗೌರವ ಅರ್ಪಿಸಿದರು. ಕರುಣಾನಿಧಿ ಅವರ ಪುತ್ರ ಎಂ ಕೆ ಸ್ಟಾಲಿನ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ದುಃಖತಪ್ತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಕರುಣಾನಿಧಿ ಅವರ ನಿಧನದ ಹಿನ್ನಲೆ ಲೋಕಸಭೆಯ ಇಂದಿನ ಕಲಾಪವನ್ನು ಮುಂದೂಡಿತು.