ಬೆಳಗಾವಿ : 1800 ಕೋಟಿ ಡೈರಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಬಚ್ಚ, ಬೇಜವಾಬ್ದಾರಿ ಮನುಷ್ಯ ಅವರ ಮಾತಿಗೆ ಕಿಮ್ಮತ್ತಿಲ್ಲ ನಾನು ನನ್ನ ಡೈರಿಯಲ್ಲಿ ಅಡ್ವಾಣಿ ಅವರಿಗೆ ಹಣ ನೀಡಿರುವ ಬಗ್ಗೆ ಬರೆದಿದ್ದೇನೆ ಎಂದು ಆರೋಪಿಸಿದ್ದು, ಇದಕ್ಕೆ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪವನ್ನು ಅವರೇ ಸಾಭೀತು ಪಡಿಸಲಿ ನಾನು ತಪ್ಪು ಮಾಡಿದ್ದರೆ ರಾಜಾಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.










