ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ರೇವಣ್ಣ ಅವರು ನನ್ನ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ದೇಶದ ಮಾಜಿ ಪ್ರಧಾನಿ ದೇವೇಗೌಡರ ಸುಪುತ್ರ ಹೆಚ್.ಡಿ ರೇವಣ್ಣ ಅವರು ಸತ್ಯ ಹರಿಶ್ಚಂದ್ರರು. ಈಗ ಅವರ ಬಾಯಲ್ಲಿ ಬಹಳ ಆದರ್ಶ ಮಾತುಗಳು ಬರುತ್ತಿವೆ. ರೇವಣ್ಣನವರೇ ನೀವು ನನಗಿಂದ ಹಿರಿಯರಿದ್ದೀರಿ, ನನ್ನ ಸ್ವಾಭಿಮಾನ ಕೆಣಕಿದ್ದೀರಿ. ನನ್ನ ಬಾಯಲ್ಲಿಯೂ ಎಲ್ಲಾ ಶಬ್ದಗಳೂ ಬರುತ್ತದೆ. ಕ್ಷಮೆ ಕೇಳದಿದರೆ ನಿಮ್ಮ ಎಲ್ಲಾ ಹಗರಣಗಳನ್ನು ಬಿಚ್ಚಿಡುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.










