ಅಕ್ರಮವಾಗಿ ಟಿಂಬರ್ ಕೆಲಸಕ್ಕೆ ತಂದಿದ್ದ ಆನೆಯನ್ನು ಆರ್.ಎಫ್.ಓ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ರಕ್ಷಿಸಲಾಗಿದೆ…

540

ಚಿಕ್ಕಮಗಳೂರು- ಕಾಡುಪ್ರಾಣಿಗಳನ್ನು ಸರ್ಕಸ್ಸಿನಲ್ಲಾಗಲಿ ಅಥವಾ ದುಡಿಸಿಕೊಳ್ಳುವುದಕ್ಕಾಗಲಿ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ರೆ, ಚಿಕ್ಕಮಗಳೂರಿನ ಪಂಡರವಳ್ಳಿ ಕಾಫಿತೋಟದ ಕೆಲಸಕ್ಕೆ ಆನೆಯನ್ನು ಅಕ್ರಮವಾಗಿ ಕರೆತಂದಿದ್ದು. ಅದನ್ನ ಆರ್.ಎಫ್.ಓ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ಆನೆಯನ್ನು ರಕ್ಷಿಸಿದ್ದು, ಅರಣ್ಯ ಅಧಿಕಾರಿಗಳು ಶನಿವಾರ ರಾತ್ರಿ ಆನೆಯನ್ನು ಅದೇ ಲಾರಿಯಲ್ಲಿ ಪುನಃ ಕೇರಳಾಕ್ಕೆ ಕಳಿಸಿದ್ದಾರೆ. ಆನೆ ಮೂಲತಃ ಅಸ್ಸಾಂ ರಾಜ್ಯದ್ದು. ಅದರ ಮಾಲೀಕ ಜೋನೋರಾಂ ಬಹುರಾ. ಆನೆಗೆ ಅಳವಡಿಸಿರೋ ಮೈಕ್ರೋ ಚಿಪ್ ಕೂಡ ಅಸ್ಸಾಂನದ್ದೆ. ಆದ್ರೆ, ಆನೆ ನಮ್ಮದ್ದೆಂದು ಹೇಳಿಕೊಳ್ತಿರೊ ಕೇರಳಾದ ಪಿ.ಕೋಯಾ ಅಥವ ಸೈದಲಿ ಕುಟ್ಟಿ ಎಂಬುವರ ಮೇಲಾಗ್ಲಿ ಅಥವಾ ಆನೆಯ ಮೂಲ ಮಾಲೀಕನ ಮೇಲಾಗ್ಲಿ ಪ್ರಕರಣ ದಾಖಲು ಮಾಡದೆ ಕೇವಲ ಮಾವುತ ಹಾಗೂ ಲಾರಿಯ ಚಾಲಕನ ಮೇಲೆ ಪ್ರಕರಣ ದಾಖಲಿಸಿರೋ ಅಧಿಕಾರಿಗಳು ಟಿಂಬರ್ ಮಾಫಿಯಾ ಪ್ರಭಾವಕ್ಕೆ ಕಟ್ಟುಬಿದ್ದು ಅವರನ್ನ ರಕ್ಷಿಸಿದ್ದಾರೆಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಆನೆಯನ್ನು ಅಸ್ಸಾಂನಿಂದ ಕೇರಳಾಕ್ಕೆ ತಂದಿರೋ ಬಗ್ಗೆಯೂ ಮಾರಾಟ ಅಥವ ಸಾಗಾಟದ ಅನುಮತಿ ಪತ್ರವೂ ಇಲ್ಲ. ನಕಲಿ ದಾಖಲೆ ಸೃಷ್ಠಿಸಿ ಆನೆಯನ್ನು ಕೇರಳಾದಲಿಟ್ಟುಕೊಂಡು ಟಿಂಬರ್ ಕೆಲಸಕ್ಕೆ ಕರ್ನಾಟಕಕ್ಕೆ ತರಲಾಗಿದೆ. ಇದೊಂದು ದೊಡ್ಡ ಪ್ರಕರಣವಾಗಿದ್ದು ಸೂಕ್ತ ತನಿಖೆಯಾಗಬೇಕು, ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಆನೆ ಕಳ್ಳಸಾಗಾಣೆ ದಂಧೆಕೋರರ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಕೈಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿರೋ ಪರಿಸರವಾದಿಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ