ಸಕಲೇಶಪುರ ಸಮೀಪ ರೈಲಿಗೆ ಸಿಲುಕಿ ಚಿರತೆ ಸಾವು…

472
firstsuddi

ಬೆಂಗಳೂರು – ಮಂಗಳೂರು ರೈಲು ಮಾರ್ಗ 82ನೇ ಕಿ.ಮೀ ಸಕಲೇಶಪುರ ಸಮೀಪದ ರೈಲು ಮಾರ್ಗದಲ್ಲಿ ರೈಲಿಗೆ ಸಿಲುಕಿ ಚಿರತೆ ಮೃತಪಟ್ಟಿದ್ದು ಚಿರತೆಯ ಮುಖದ ಭಾಗಕ್ಕೆ ತೀವ್ರ ಗಾಯವಾಗಿದ್ದು, ಬೇರೆ ಊರುಗಳಲ್ಲಿ ಸೆರೆ ಸಿಕ್ಕ ಚಿರತೆಗಳನ್ನು ಸಕಲೇಶಪುರ ಸಮೀಪವಿರುವ ಅರಣ್ಯಕ್ಕೆ ಬಿಡುತ್ತಿರುವ ಪರಿಣಾಮ ದೇವಾಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಅಕ್ಕ ಪಕ್ಕದ ಹಳ್ಳಿಯಲ್ಲಿಯೂ ಚಿರತೆಯೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ. ಎಂದು ಅರಣ್ಯ ಇಲಾಖೆ ವಿರುದ್ದ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.