ಅರಣ್ಯದಲ್ಲಿ ಧ್ಯಾನ ಮಾಡುತ್ತಿದ್ದ ಸನ್ಯಾಸಿ ಚಿರತೆ ದಾಳಿಗೆ ಬಲಿ…

361
firstsuddi

ಮಹಾರಾಷ್ಟ್ರ: ಅರಣ್ಯದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದ ಸನ್ಯಾಸಿಯನ್ನು ಚಿರತೆಯೊಂದು ಹತ್ಯೆ ಮಾಡಿರುವ ಘಟನೆ ಚಂದ್ರಾಪುರ ಜಿಲ್ಲೆಯ ರಾಮ್‌ದೇಗಿ ಅರಣ್ಯದಲ್ಲಿ ನಡೆದಿದೆ. ಬೌದ್ಧ ಸನ್ಯಾಸಿ ರಾಹುಲ್​ ವಾಕೆ (35) ಮೃತಪಟ್ಟ ಸನ್ಯಾಸಿ ಎಂದು ಗುರುತಿಸಲಾಗಿದ್ದು,  ರಾಹುಲ್​ ವಾಕೆ ಅವರ ಜೊತೆಯಲ್ಲಿ ಅವರ ಇಬ್ಬರು ಭಕ್ತರು ಅರಣ್ಯದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿ ರಾಹುಲ್​ ವಾಕೆ ಅವರನ್ನು ಎಳೆದುಕೊಂಡು ಹೋಗಿದೆ. ತಕ್ಷಣ ಅವರ ಇಬ್ಬರು ಭಕ್ತರು ಓಡಿ ಹೋಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಅರಣ್ಯಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.