ಶಕ್ತಿಧಾಮದ ಮಕ್ಕಳ ಜೊತೆ ಗಣರಾಜ್ಯೋತ್ಸವ ಆಚರಿಸಿದ ಶಿವಣ್ಣ.

73
firstsuddi

ಮೈಸೂರು : ಇಂದು 73ನೇ ಗಣರಾಜ್ಯೋತ್ಸವದ ಹಿನ್ನೆಲೆ ಮೈಸೂರಿನ ಶಕ್ತಿಧಾಮ ಆಶ್ರಮದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿದ ಬಳಿಕ ಶಿವಣ್ಣ ಅನಾಥ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಸ್ಕೂಲ್ ಬಸ್ ಅನ್ನು ಸ್ವತಃ ಶಿವರಾಜ್ ಕುಮಾರ್ ಅವರು ಡ್ರೈವ್ ಮಾಡಿದರು. ಮಕ್ಕಳು ಶಿವಣ್ಣನನ್ನು ನೋಡಿ, ಅವರ ರೈಡ್ ಎಂಜಾಯ್ ಮಾಡಿದ್ದಾರೆ.

ಈ ಶಕ್ತಿಧಾಮವನ್ನು ಡಾ.ರಾಜ್ ಕುಮಾರ್ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದಾರೆ. ದಿ. ಪುನೀತ್ ರಾಜ್ ಕುಮಾರ್ ಅವರು ಮೊದಲು ಆಶ್ರಮದ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಆದರೆ ಅವರು ಅಗಲಿದ ಬಳಿಕ ಆಶ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶಿವಣ್ಣ ಮತ್ತು ಗೀತಾ ಅವರು ವಹಿಸಿಕೊಂಡಿದ್ದಾರೆ.